ಮಾತುಗಳು ಮೌನವಾದಾಗ!

ಮನುಷ್ಯ ಕೂಡ ಪ್ರಕೃತಿಯ ಭಾಗವೇ. ಕೆಲವೊಮ್ಮೆ ಪ್ರಾಕೃತಿಕ ಅಸಮತೋಲನೆ, ಮತ್ತು ಬದಲಾವಣೆಗಳು ವ್ಯಕ್ತಿಯ ಮೇಲೆ ಪರಿಣಾಮಕಾರಿ ಪ್ರಭಾವ ಬೀರುತ್ತದೆ. ಆ ಪ್ರಾಕೃತಿಕ ಬದಲಾವಣೆಗೆ ತಕ್ಕಂತೆ ವ್ಯಕ್ತಿ, ವ್ಯಕ್ತಿತ್ವಗಳು ಬದಲಾಗುವುದು ಸಹಜವೇ. ಇವೆಲ್ಲವೂ ಜಗದ ನಿಯಮ ಕೂಡ. ಈ ಪ್ರಕೃತಿಯಲ್ಲಿ ಮನುಷ್ಯ-ಪ್ರಾಣಿಗೆ ಮಾತ್ರ ಅವರದೇ ಆದ ವಿಭಿನ್ನ ಭಾವನೆಗಳು, ಕಲ್ಪನೆಗಳು, ಆಶಯಗಳು, ಪ್ರೀತಿ-ನಿರೀಕ್ಷೆಗಳು, ಮತ್ತು ಅಭಿಪ್ರಾಯಗಳು ಮೂಡಿರುತ್ತವೆ. ಇವೆಲ್ಲವು ಕೆಲವರಲ್ಲಿ ತಮಗೆ ಅರಿವಿಲ್ಲದೆ ಮಿತಿಮೀರಿ ಇರುತ್ತವೆ. ಆ ಮಿತಿಮೀರಿದ ಗುಣಗಳ ಜೊತೆಗೆ ಎಲ್ಲೇ ಮೀರಿದ ಕೋಪ, ದ್ವೇಷ, ಅಸೂಯೆ, ಆಕ್ರೋಶ, ದುರಹಂಕಾರ ಮತ್ತು ಸ್ವಾರ್ಥ ಎಂಬ ವಿಲಕ್ಷಣ-ಗುಣಗಳು ಜೊತೆಗೂಡಿರುತ್ತವೆ. ಆಗ ಅವರಿಗೆ ಬೇರೆಯವರ ಭಾವನೆ, ಮತ್ತು ಆಶಯಗಳ ಬಗ್ಗೆ ಆಲೋಚನೆ ಮಾಡುವ ಸಾಮರ್ಥ್ಯವೇ ಇರುವುದಿಲ್ಲ. ಬದಲಾಗಿ, ತನ್ನ ವಿಲಕ್ಷಣ-ಗುಣದ ಬಣ್ಣಗಳನ್ನು ಬೇರೆಯವರ ಮುಖಕ್ಕೆ ಬಳೆದು ಆ ವ್ಯಕ್ತಿ ಮತ್ತು ವ್ಯಕ್ತಿತ್ವದ ಜೊತೆ ಚೆಲ್ಲಾಟವಾಡುತ್ತಾರೆ . ಅರಿವಿಲ್ಲದ ಈ ನಡವಳಿಕೆಗಳು ಅದೆಷ್ಟೋ ಸ್ನೇಹ ಸಂಬಂಧಗಳ ಬಿರುಕಿಗೆ ಕಾರಣಗಳಾಗಿವೆ ಕೂಡ. ತನ್ನವರೇ ತನ್ನ ವ್ಯಕ್ತಿತ್ವದ ಮೇಲೆ ದಾಳಿ ಮಾಡಿದರೆ ಒಮ್ಮೆ ಪ್ರತಿರೋಧ, ಮತ್ತು ಪ್ರತಿದಾಳಿ ಸಹಜವಾಗಿ ಬರುತ್ತದೆ. ಆದರೆ, ನಿರಂತರವಾಗಿ ಭಾವನೆಗಳಿಗೆ ಪೆಟ್ಟು ಬಿದ್ದರೆ ತನ್ನ ಸಹಜ ನಡೆ, ಮತ್ತು ಮಾತುಗಳು " ಮೌನ " ವಾಗಿ ಬದಲಾಗುತ್ತದೆ. ಮಾತುಗಳು ಮೌನವಾದಾ...