RCB ಜೊತೆ ಕೊಹ್ಲಿಯ ಭಾವನಾತ್ಮಕ ನಿಲುವು ಒಂದು ಮಾದರಿಯೇ?

RCB... RCB... RCB... ಕೋಟ್ಯಂತರ ಜನಗಳ ಅಣು ಅಣುವಿನಲ್ಲೂ ಕಣ ಕಣದಲ್ಲೂ RCB. ಹದಿನೆಂಟು ವರ್ಷಗಳಲ್ಲಿ RCB ತಂಡದ ಹಲವಾರು ಆಟಗಾರರ ಮಿತಿಮೀರಿದ ಪ್ರಯತ್ನಗಳು, ಎಡವಟ್ಟುಗಳು, ಅನುಭವಗಳು, ಸೋಲುಗಳು, ನೋವುಗಳು, ನಿರಾಷೆಗಳು. ಸ್ಪರ್ಧಾತ್ಮಕ ಕ್ರೀಡೆ ಎಂದ ಮೇಲೆ ಇವೆಲ್ಲವೂ ಸರ್ವೇ ಸಾಮಾನ್ಯವೇ. ಪ್ರತಿ ಬಾರಿ ಸೋತಾಗಲು " RCB ಗೆ ಚಿಪ್ಪು ಲಾಲಿಪಪ್ಪು " ಎಂದು ಕೇವಲವಾಗಿ ಗೇಲಿ ಮಾಡಿದಾಗಲೂ, ಉದಾರ ಮನಸ್ಸಿನಿಂದ "ಪರವಾಗಿಲ್ಲ ಬಿಡಿ... ಮುಂದಿನ ಸಲ ಕಪ್ ನಮ್ದೇ" ಅಂತ ಹೇಳಿಕೊಂಡು ಸಮಾಧಾನ ಪಡುತ್ತಿದ್ದೆವು. ಅದೇ ರೀತಿ ಈ ಬಾರಿಯೂ ಗೆಲ್ಲದಿದ್ದರೆ ಅಷ್ಟು ಸುಲಭವಾಗಿ ನಾವು ಹೇಳಲು ಸಾಧ್ಯವಿತ್ತೇ? ಖಂಡಿತವಾಗಿಯೂ ಇಲ್ಲ. RCB ತಂಡ ಈಗ ಅಲ್ಲದಿದ್ದರೆ ಮುಂದೆ ಯಾವಾಗಲೋ ಒಂದು ಸರ್ತಿ ಗೆಲ್ಲಬಹುದಿತ್ತು. ಆದರೆ, ಈ ಬಾರಿ ಗೆಲುವು ಬೇಕೇ ಬೇಕು ಎಂದು ಕೋಟ್ಯಾಂತರ ಅಭಿಮಾನಿಗಳು ಕಾದು ಕುಳಿತಿದ್ದರು. ಈ ಆಶಯ ಕೇವಲ RCB ತಂಡದ ಮೇಲಿನ ಅಭಿಮಾನ ಮಾತ್ರವಲ್ಲ, ಒಂದು ವ್ಯಕ್ತಿತ್ವಕ್ಕಾಗಿ ಕೂಡ. ಒಮ್ಮೆಯಾದರೂ " ಈ ಸಲ ಕಪ್ ನಮ್ದು " ಎಂದು ಉದ್ಘರಿಸಿ ಮುತ್ತಿಡಬೇಕು ಎಂದು 18 ವರ್ಷಗಳ ಕಾಲ ತಂಡದೊಂದಿಗೆ ಬಂಡೆಯಾಗಿ ನಿಂತದ್ದ ಏಕೈಕ ವ್ಯಕ್ತಿ ವಿರಾಟ್ ಕೋಹ್ಲಿ. ಹೌದು, ಪ್ರತಿ ವರ್ಷ ಈತನಿಗೆ ಗೆಲುವಿನ-ಕುದುರೆ ಏರುವ ಅವಕಾಶವಿದ್ದರೂ ಬೇರೆ ಯಾವುದೇ ತಂಡಕ್ಕೆ ಹೋಗದೆ ಭಾವನಾತ್ಮಕವಾಗಿ ನಾಡಿನ ಜನತೆಯೊಂದಿಗೆ ಬೆರೆತಿದ್ದ ಈ ವ್ಯಕ್...