ಅಸಲಿ ರೈತ, ನಕಲಿ ಪ್ರೀತಿ.!


ನಕಲಿ ರೈತರು...!? - ಈ ಮಾತು ಇತ್ತೀಚೆಗೆ ತುಂಬಾ ಪ್ರಚಲಿತದಲ್ಲಿ ಇತ್ತು. ಒಂದು ವರ್ಷದಿಂದ ನಿರಂತರವಾಗಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ರಾಜಕೀಯ ಬಣ್ಣ ಬಳೆದು "ಪ್ರತಿಭಟನೆ ಮಾಡುತ್ತಿರುವವರು ನಕಲಿ ರೈತರು" ಎಂದು ಸರ್ಕಾರದ ಪ್ರತಿನಿಧಿಗಳೇ ಹೇಳಿದ್ದರು.
  • ನಿನ್ನೆಯ ದಿನ ದೇಶದ ಪ್ರಧಾನಿಯೇ ಬಂದು ರೈತರ ಕ್ಷಮೆಯಾಚಿಸಿ ಕಾಯ್ದೆಗಳನ್ನ ವಾಪಸ್ ಪಡೆಯುತ್ತಿದ್ದೇವೆ ಎಂದು ಹೇಳಿದ್ದಾರೆ. ಅವರು ಹೇಳಿದ ಪ್ರಕಾರ "ಕಾಯ್ದೆಗಳು ಮಾಡಿದ್ದು ರೈತರ ಉದ್ದಾರಕ್ಕಾಗಿ, ಆದರೆ ಹಿಂಪಡೆಯುತ್ತಿರುವುದು ದೇಶಕ್ಕಾಗಿ' - ಈ ಮಾತನ್ನು ಹೇಗೆ ವ್ಯಾಖ್ಯಾನಿಸಬೇಕು?
  • ರೈತರ ಉದ್ದಾರಕ್ಕೆಂದೇ ಮಾಡಿದ್ದ ಕಾಯ್ದೆಗಳು ಅಂದಮೇಲೆ ವಾಪಸ್ ಪಡೆಯುವ ಬದಲು, ಲೋಪವಿದ್ದ ಕೆಲವು ಕಾನೂನುಗಳನ್ನು ಸರಿಪಡಿಸಲಿಲ್ಲವೇಕೆ?
  • ನಿಮ್ಮ ಪ್ರಕಾರ ಕಾಯ್ದೆಗಳನ್ನ ವಿರೋಧ ಮಾಡುತ್ತಿರೋದು ಕೇವಲ 1% ನಕಲಿ ರೈತರು ಮಾತ್ರ. ಹಾಗಿದ್ದರೆ, 99% ಅಸಲಿ ರೈತರ ಬೆಂಬಲ ನಿಮಗೆ ಸಿಗುತ್ತದೆ ಎಂಬ ಭರವಸೆ ಮೂಡಲಿಲ್ಲವೇಕೆ?
  • ಸತ್ಯವಾಗಿಯೂ ಅದು ನಕಲಿ ರೈತರ ಹೋರಾಟವೇ ಎಂದು ತಮಗೆ ಖಾತ್ರಿಯಾಗಿದ್ದಲ್ಲಿ ಆ ಕೆಲವೇ ನಕಲಿಯರ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಾಗಿಲ್ಲವೇಕೆ?
  • ಈ ಹೋರಾಟದಲ್ಲಿ 700 ಬಡ ರೈತರು ಮೃತಪಟ್ಟಿದ್ದಾರೆ ಅಲ್ವಾ, ಇವರಲ್ಲಿ ಎಷ್ಟು ನಕಲಿ ರೈತರಿದ್ದಾರೆ ತೋರಿಸಿ ನೋಡೋಣ?
  • ನಮ್ಮ ಗ್ರಾಮದಿಂದಲೂ ಬೇಸಾಯ ಮಾಡುವ ರೈತರು ಹಲವಾರು ಬಾರಿ ಈ ಹೋರಾಟದಲ್ಲಿ ಭಾಗವಹಿಸಿದ್ದರು. ಇವರೆನ್ನೆಲ್ಲ ನಕಲಿ ಎಂದು ಹೇಗೆ ಬಣ್ಣಿಸುತ್ತೀರಿ?
  • ಮುಂದಿನ ದಿನಗಳಲ್ಲಿ ರೈತರಿಂದ ರಾಜಕೀಯ ದೃವೀಕರಣ ಆಗಬಹುದು ಎಂಬ ಲೆಕ್ಕಾಚಾರ ಮಾಡಿಯೇ ಕಾಯ್ದೆಗಳನ್ನ ವಾಪಸ್ ಪಡೆಯಲಾಯಿತೆ?
  • ಹಾಗಿದ್ದರೆ ಇದು ಅಸಲಿ ರೈತರ ಮೇಲೆ ಸರ್ಕಾರಕ್ಕೆ ಇರುವುದು "ನಕಲಿ ಪ್ರೀತಿ" ಅನ್ನಿಸೋದಿಲ್ವಾ?
ಸಣ್ಣ-ಇಳುವರಿ ರೈತರೇ ದೇಶಕ್ಕೆ ಆಹಾರ ಪೂರೈಕೆಯ ಬೆನ್ನೆಲುಬಾಗಿ ನಿಂತಿರುವಾಗ - ಈ ರೈತಾಪಿ ವರ್ಗಕ್ಕೆ ಮಾರಕವಾಗದಂತಹ ಸುಧಾರಣೆಗಳು ಖಂಡಿತವಾಗಿಯೂ ಆಗಬೇಕಿವೆ. ಈ ವಿಷಯದಲ್ಲಿ ಸರ್ಕಾರಗಳು ತಮ್ಮ ಪಕ್ಷಕ್ಕೆ ಲಾಭ-ನಷ್ಟದ ಲೆಕ್ಕಾಚಾರ ಮಾಡಕೂಡದು ಎಂಬುದು ನನ್ನ ಅನಿಸಿಕೆ.

ರೈತರ ಬಗೆಗಿನ ದೊರಣೆ ಕುರಿತು ನನ್ನ ಹಿಂದಿನ ಲೇಖನ ಓದಿ 👉 "ಕ್ಷಮಿಸಿ ರೈತರೇ - ನಮ್ಮೆಲ್ಲರ ಕರ್ಮ"

- ರಾಘವೇಂದ್ರ. ಜಿ. ಶ್ರೀರಾಮಯ್ಯ
 9060660060           

Comments

  1. So true, and the timings of the announcement just before the heat of UP and Punjab election makes their intentions very clear.

    ReplyDelete

Post a Comment

ನಿಮ್ಮ ಅನಿಸಿಕೆ ಅಭಿಪ್ರಾಯ ಇಲ್ಲಿ ಬರೆಯಿರಿ

Popular posts

ಸೂತಕದಲ್ಲಿ ಸಡಗರದ ರಾಜ್ಯೋತ್ಸವ ಬೇಡ

ಹೇಗಿದ್ದಾರೆ ಮೇಷ್ಟ್ರು..?

ಸಾರ್ಥಕ ನಿವಾಸ

ಶ್ರೀಮಂತನಾಗಬೇಕಾದರೆ ಹೆಚ್ಚು ವಿದ್ಯಾವಂತನಾಗಬೇಡ.!

ಬಡಿದೆಬ್ಬಿಸಿ ಕೇಳಬೇಕು ಗಾಂಧೀಜಿ ಯನ್ನ

ಮನೋಜ್ಞ ಮಾದರಿ

ಸಮುದಾಯ ಪ್ರಾಬಲ್ಯದ ಮುಂದೆ ಮಂಡಿಯೂರಿದ ಸಂಗೀತ ಸಾಧನೆ

ದೃಢ ನಿರ್ಧಾರ, ದೃಢ ಮನಸ್ಸು

1 ಲಕ್ಷ ರೂಪಾಯಿ ಒಂದು ಕೋಟಿ ಆಯಿತು.!

ಅಮುಲ್ ಗೆ ವಿರೋಧವೇಕೆ, ನಂದಿನಿ ಗೆ ಬೆಂಬಲ ಬೇಕೆ?